-->

Part 108 - Kannada Jokes , Fun , Haasya , Humor , Quotes , Greetings

ಅತ್ತೆಯೊಬ್ಬಳಿಗೆ 👵 ತನ್ನ ಅಳಿಯಂದಿರಿಗೆ👨👳👮 ತನ್ನ ಮೇಲಿರುವ ಪ್ರೀತಿ 💖 ಎಷ್ಟು ಎಂಬುದನ್ನು ಪರೀಕ್ಷಿಸುವ 🤔 ಮನಸ್ಸಾಯಿತು.

ಕೂಡಲೇ ಆಕೆ ಮನೆಯ 🏡 ಪಕ್ಕದಲ್ಲಿದ್ದ ಬಾವಿಗೆ ಜಿಗಿದು ಬಿಟ್ಟಳು.
Part 108 - Jokes , Fun , Haasya , Humor , Quotes , Greetings
ಅಲ್ಲೇ ಕುಳಿತು ಹರಟೆ ಹೊಡೆಯುತ್ತಿದ್ದ ಅಳಿಯಂದಿರು 👨👳👮 ಓಡಿ ಬಂದರು. 👮ಮೊದಲನೆಯ ಅಳಿಯ ಬಾವಿಗೆ ಹಾರಿ ಆಕೆಯನ್ನು ಕಾಪಾಡಿದ. ಹಿರಿಹಿರಿ ಹಿಗ್ಗಿದ ಅತ್ತೆಮ್ಮ👵, ಅವನಿಗೆ👮 ತನ್ನ ಕಾರ್🚖 ಕೊಟ್ಟುಬಿಟ್ಟಳು. ಎರಡನೆಯ ದಿನ ಮತ್ತೆ ಬಾವಿಗೆ ಹಾರಿದಳು. ಎರಡನೆಯ ಅಳಿಯ👨 ಜಿಗಿದು ಆಕೆಯನ್ನು ಬದುಕುಳಿಸಿದ. ಅವನಿಗೆ ಬೈಕ್🏍 ಕೊಟ್ಟಳು. ಮೂರನೆಯ ಅಳಿಯನನ್ನು👳 ಪರೀಕ್ಷಿಸಬೇಕೆಂದು ಮೂರನೇ ದಿನವೂ ಬಾವಿಯಲ್ಲಿ ಜಿಗಿದಳು. 👳ಮೂರನೇ ಅಳಿಯ ಇನ್ನೇನು ಆಕೆಯನ್ನು ಉಳಿಸುವವನಿದ್ದ, ಅಷ್ಟರಲ್ಲೇ ಅವನು 🤔ಅಂದುಕೊಂಡ: ‘ಇನ್ನೇನು ಮನೆಯಲ್ಲಿ 🏚ಹಳೆಯ ಸೈಕಲ್🚲 ಅಷ್ಟೇ ಉಳಿದಿರೋದು. ಆ ಡಬ್ಬಾ ಸೈಕಲ್‌ಗಾಗಿ🚲 ಯಾಕೆ ಕಷ್ಟ ಪಡಬೇಕು? ಹೀಗೆ ಯೋಚಿಸಿದವನೇ. ಸುಮ್ಮನಾಗಿಬಿಟ್ಟ. 🤔😏😒 👵ಅತ್ತೆ ಸತ್ತೇಹೋದಳು😵. ಆದರೂ ಮರುದಿನ ಈ ಮೂರನೇ👳 ಅಳಿಯನಿಗೆ ಮರ್ಸಿಡಿಸ್🚘 ಕಾರು ಸಿಕ್ಕಿತು. ಹೇಗೆ ಗೊತ್ತಾ? .
.
.
.
ಮಾವ👴 ತಂದು ಕೊಟ್ಟ!!! 
😄😄😆😂

*********

~~~~ಪ್ರಕೃತಿ~ವಿಕೃತಿ~ಸಂಸ್ಕೃತಿ   ~~~

Ⓜ ಕಣ್ಣು ಪ್ರಕೃತಿ 👀  
   ಕೆಂಗಣ್ಣು ವಿಕೃತಿ 😠
ಕರುಣೆಯ ಕಣ್ಣು ಸಂಸ್ಕೃತಿ 👁❣👁
Ⓜಆಲಿಸೋದು ಪ್ರಕೃತಿ👂
    ಕದ್ದಾಲಿಸೋದು ವಿಕೃತಿ 🤔
    ದೀನದಲಿತರ ದನಿಯನ್ನು
    ಕೇಳಿಸಿಕೊಳ್ಳೋದು ಸಂಸ್ಕೃತಿ 😒

Ⓜ ಕೆನ್ನೆ  ಪ್ರಕೃತಿ 😗
    ಕೆನ್ನೆಗೆ ಬಾರಿಸೋದು ವಿಕೃತಿ 👋
    ಕೆನ್ನೆ  ಸವರಿ ಪ್ರೀತಿಯಿಂದ  ಮಾತನಾಡೋದು ಸಂಸ್ಕೃತಿ 🤗
Ⓜಮೂಗು ಪ್ರಕೃತಿ 👃  
ಇನ್ನೊಬ್ಬರ ವಿಚಾರದಲ್ಲಿ ಮೂಗು 
   ತೋರಿಸೋದು ವಿಕೃತಿ😏
   ಮೂಗಿಗೊಂದು ಮೂಗುತಿ    ಸಂಸ್ಕೃತಿ 😘
Ⓜ ಕಾಲು ಪ್ರಕೃತಿ 👢👢   
      ಒದೆತ ವಿಕೃತಿ 👟
     ಕುಣಿತ ಸಂಸ್ಕೃತಿ💃🏽

Ⓜ ಆಚಾರ ಪ್ರಕೃತಿ 🖐
     ಅನಾಚಾರ ವಿಕೃತಿ 👊    
     ಸದಚಾರ ಸಂಸ್ಕೃತಿ 🙏
Ⓜ ಆಸೆ ಪ್ರಕೃತಿ 😋
     ದುರಾಸೆ ವಿಕೃತಿ 😤 
     ಸದಾಶಯ ಸಂಸ್ಕೃತಿ 🙌

Ⓜ ನಮಗಾಗಿ ದುಡಿಯೊದು ಪ್ರಕೃತಿ 👐
ಇತರರಿಂದ ದುಡಿಸಿಕೊಳ್ಳೋದು ವಿಕೃತಿ 👋
ಇತರರಿಗಾಗಿ ದುಡಿಯೋದು ಸಂಸ್ಕೃತಿ 👏
Ⓜ ದುಡಿದು ತಿನ್ನೋದು ಪ್ರಕೃತಿ 🤕
      ದುಡಿಸಿ ತಿನ್ನೋದು ವಿಕೃತಿ 😎
      ತಾನು ದುಡಿದು ಇನ್ನೊಬ್ಬರಿಗೆ 
      ತಿನಿಸೋದು ಸಂಸ್ಕೃತಿ 🤗

Ⓜ ಹಸಿವಾದಾಗ ಊಟ ಮಾಡೋದು ಪ್ರಕೃತಿ🍛
ಹಸಿವಾಗದಿದ್ದರೂ  ಊಟ ಮಾಡೋದು ವಿಕೃತಿ🍕🌯
ಹಸಿದವನಿಗೆ ಉಣಿಸೋದು ಸಂಸ್ಕೃತಿ 🤒👌

Ⓜ ಭಯ ಪ್ರಕೃತಿ 😳
      ಭಯೋತ್ಪಾದನೆ ವಿಕೃತಿ 😱
      ದಯೋತ್ಪಾದನೆ ಸಂಸ್ಕೃತಿ 😚

Ⓜ ಹಾಸ್ಯ ಪ್ರಕೃತಿ😀
      ಅಪಹಾಸ್ಯ ವಿಕೃತಿ😂
      ತಿಳಿಹಾಸ್ಯ ಸಂಸ್ಕೃತಿ😍

Ⓜ ಜ್ಯೋತಿ ಪ್ರಕೃತಿ🕯
      ಜ್ವಾಲೆ ವಿಕೃತಿ🔥
      ನಂದಾದೀಪ ಸಂಸ್ಕೃತಿ♨

Ⓜ ನೀರು ಪ್ರಕೃತಿ💦
      ನೆರೆ ವಿಕೃತಿ 🌊
      ನೀರಿನ ನಾಲೆ ಸಂಸ್ಕೃತಿ🚿

Ⓜ ತಲೆಯೊಳಗಿನ ಬುದ್ದಿ ಪ್ರಕೃತಿ😴 
     ಅದು ಕೆಟ್ಟದ್ದಾಗಿದ್ದರೆ ವಿಕೃತಿ👹
     ಅದು ನೆಟ್ಟಗಿದ್ದರೆ ಸಂಸ್ಕೃತಿ☺

 Ⓜ ಮುಖ ಪ್ರಕೃತಿ😊
      ಸಿಡುಕುಮುಖ ವಿಕೃತಿ😡
      ನಗುಮುಖ ಸಂಸ್ಕೃತಿ..😊


*********

ಗಂಡಸರ ಗೋಳು
ಗಂಡ ಹೆಂಡತಿಗೆ ಹೊಡೆದರೆ-ಕ್ರೂರಿ
ಹೆಂಡತಿಹೊಡೆದರೆ- ನಾಮರ್ದ
ಮಕ್ಕಳಿಗೆ ಬೈದರೆ- ಹಿಟ್ಲರ್
ಫ್ರೀಯಾಗಿ ಬಿಟ್ಟರೆ- ಬೇಜವಾಬ್ದಾರ
ಅಮ್ಮನ ಮಾತು ಕೇಳಿದ್ರೆ - ಕೂಸು
(ಇದರ ಮುಖಕ್ಕೆ ಮದ್ವೆ ಬೇರೆ  ಕೇಡು)
ಹೆಂಡ್ತಿ ಮಾತು ಕೇಳಿದ್ರೆ- ಅಮ್ಮಾವ್ರ ಗಂಡ.
ಕೋಪ ಮಾಡ್ಕೊಂಡ್ರೆ- ದೂರ್ವಾಸ
ಮಾಡ್ಕೊಳದಿದ್ರೆ- ತೀರ ಸಾಧು..ಯಾವ್ದಕ್ಕೂ ಪ್ರಯೋಜನವಿಲ್ಲ
ಕೆಲಸ ಮಾಡಿದ್ರೆ- ಈ ಸುಖಕ್ಕೆ ಮದ್ವೆ ಯಾಕೆ ಆಗ್ಬೇಕಿತ್ತೋ
ಮನೇಲಿ ಕೂತ್ರೆ- ಉದ್ಯೋಗಂ ಪುರುಷ ಲಕ್ಷಣಂ
ಹೆಂಡತಿ ಸ್ನೇಹಿತೇರ ಜತೆ ಮಾತಾಡದಿದ್ರೆ- ಮೂಷಾಂಡಿ
ನಗ್ತ ಮಾತಾಡಿದ್ರೆ- ತೀರ ಚೆಲ್ಲು..ಜಡೆ ನೋಡಿದ್ರೆ ಜೊಲ್ಲು ಸುರಿಸುತ್ತೆ.
ಖರ್ಚು ಮಾಡದಿದ್ರೆ -ಜುಗ್ಗ
ಮಾಡಿದ್ರೆ- ದಾನಶೂರ ಕರ್ಣ
ಬೇಗ ಮನೆಗೆ ಬಂದ್ರೆ- ಸಂಶಯಪಿಶಾಚಿ
ಬರದಿದ್ರೆ- ಉಂಡಾಡಿಗುಂಡ.
ಓದದಿದ್ದರೆ- ಸರಸ್ವತಿ ದ್ವೇಷಿ
ಓದಿದರೆ- ಪುಸ್ತಕದ ಹುಳ
ಧಾರಾವಾಹಿ ನೋಡದಿದ್ರೆ-ಅರಸಿಕ
ನೋಡಿದ್ರೆ- ಬೇರೇನಿದೆ ಕಡಿಯೋಕೆ?

ಓ ದೇವಾ ಹೇಗಯ್ಯ ಬದುಕಲಿ?
☹️☹️☹️

*********

ಗುರುವಿಗೆ ಶಿಷ್ಯ ಹೇಳಿದ-- "ಗುರುದೇವ....
ಆಶ್ರಮಕ್ಕೆ ಒಬ್ಬ ವ್ಯಕ್ತಿ ಹಸುವನ್ನು ದಾನವಾಗಿ ನೀಡಿದ್ದಾನೆ...
ಗುರು ಹೇಳಿದ-- ಒಳ್ಳೆದಾಯ್ತು..!! ಕುಡಿಯೋಕೆ ಹಾಲು ಸಿಕ್ತು....

ಒಂದು ವಾರದ ನಂತರ ---

ಶಿಷ್ಯ ಬಂದು ಗುರುವಿನ ಹತ್ತಿರ-- ಗುರುದೇವ..ಯಾವ ವ್ಯಕ್ತಿ ಒಂದು ವಾರದ ಹಿಂದೆ ಹಸು ನೀಡಿದ್ದನೋ..ಅದನ್ನಾ ಅವನು ವಾಪಸ್ ತೆಗೆದುಕೊಂಡು ಹೋದಾ....
ಗುರು-- ಒಳ್ಳೆದಾಯ್ತು... ಸಗಣಿ ಎತ್ತೋ ಕೆಲಸದಿಂದಾದ್ರೂ ಮುಕ್ತಿ ಸಿಕ್ಕಿತು...!!!

" ಪರಿಸ್ಥಿತಿ " ಬದಲಾದ್ರೆ ನಿಮ್ಮ "ಮನಸ್ಥಿತಿ" ಬದಲಾಯಿಸಿ...
ದುಃಖ ಸುಖವಾಗಿ ಬದಲಾಗುತ್ತೆ....

#ಶಾಸ್ತ್ರ

*********

ಮಾಸ್ತರ- ಯಾಕೋ ಗುಂಡಾ ನಾ ಎಷ್ಟ  ಬ್ಯೆದರೂ  ಸಿಟ್ಟು   ಮಾಡಿಕೊಳ್ಳುವದಿಲ್ಲ?  ಎದರು ಮಾತಾಡುದಿಲ್ಲ? ಯಾಕಲೇ?

ಗುಂಡ - ಸರ್ ನೀವು ಹೇಳಿದ ವೇದವಾಕ್ಯ ನನ್ನ ಕಿವ್ಯಾಗ ಇನ್ನೂ ಗುಂಯ್  ಗುಡತ್ತ  ......

ಮಾಸ್ತರ- ಎಷ್ಟ ಒಳ್ಳೆಯ ಶಿಷ್ಯಾಲೆ ನೀನು, ಯಾವದಲೇ ಆ ವೇದವಾಕ್ಯ ಅದು?😴😴😴😴
ಗುಂಡ - ನೀವೇ ಹೇಳಿದ್ದು ಸರ್, " ನಾಯಿ ಬೊಗಳಿದ್ರ ದೇವಲೋಕ ಹಾಳಾಗತೈತೇನು?" 😜😜😜😜

*********

*ಸದಾ ನೆನಪಿಟ್ಟುಕೊಳ್ಳಬೇಕಾದ ಮೂರು ವಿಷಯಗಳು*
*〰〰〰〰〰〰〰〰〰〰*

⚫ ಗೌರವಿಸಬೇಕಾದ ಮೂರು ವಿಷಯಗಳು
*ತಾಯಿ,*
   *ತಂದೆ,*
      *ಗುರು.*

⚫ ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳು
*ಪತ್ನಿ,*
   *ಐಶ್ವರ್ಯ,*
      *ಬುದ್ಧಿವಂತಿಕೆ*

⚫ ಮರೆಯಬಾರದ ಮೂರು ವಿಷಯಗಳು
 *ಸಾಲ,*
   *ಕರ್ತವ್ಯ,*
      *ಖಾಯಿಲೆ,*

⚫ ನಿಯಂತ್ರಣದಲ್ಲಿಡಬೇಕಾದ ಮೂರು ವಿಷಯಗಳು
 *ಆಸೆ,*
   *ನಾಲಿಗೆ,*
      *ಕಾಮ*

⚫ ಸಂತೋಷಕ್ಕಾಗಿ ಬಿಡಬೇಕಾದ ಮೂರು ವಿಷಯಗಳು
 *ಕೋಪ,*
   *ಅಸೂಯೆ,*
     *ಮತ್ಸರ*

⚫ ದೂರವಿಡಬೇಕಾದ ಮೂರು ವಿಷಯಗಳು
*ಕೆಟ್ಟವರ ಸಹವಾಸ,*
   *ಸ್ವಾರ್ಥ,*
      *ದುರಾಳತನ*

⚫ ಸಮೃದ್ಧಿ ಹೊಂದುವ ಮೂರು ವಿಷಯಗಳು
 *ದೇವರು,*
    *ವಿದ್ಯೆ,*
      *ಕಠಿಣ ಪರಿಶ್ರಮ*

⚫ ಎಲ್ಲರೂ ಕಾಯಬೇಕಾದ ಮೂರು ವಿಷಯಗಳು
 *ಸಮಯ,*
   *ಸಾವು,*
     *ಗಿರಾಕಿ*

⚫ ಅರಿವಿನ ಮೂರು ವಿಷಯಗಳು
 *ಕ್ಷಮೆ,*
   *ಮರೆಯುವಿಕೆ,*
      *ಗೆಳೆತನ*

⚫ ಜೀವನದಲ್ಲಿ ಪಾಠ ಕಲಿಸುವ ಮೂರು ವಿಷಯಗಳು
*ಖಾಲಿ ಜೇಬು,*
   *ಹಸಿದ ಹೊಟ್ಟೆ,*
     *ಒಡೆದ ಹೃದಯ*


⚫ಹಿಂದಕ್ಕೆ ಬಾರದ ಮೂರು ವಿಷಯಗಳು
 *ಕಳೆದು ಹೋದ ಸಮಯ,*
    *ಆಡಿದ ಮಾತು,*
        *ಹೋದ ಪ್ರಾಣ*

*ಬಿಡುವು ದೊರೆತರೆ, ಕಾಡುವುದು ಚಿಂತೆ-ಭಯ.
 ಬಿಡುವಿಲ್ಲದವನೇ ಭಾಗ್ಯಶಾಲಿ.ಏಕೆಂದರೆ, 
 ಅವನಿಗೆ ಯೋಚಿಸುವುದಕ್ಕೂ ಅವಕಾಶವಿರುವುದಿಲ್ಲ.*👁

*********

ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ

ನಿತ್ಯ ದಾನವ ಮಾಡಿ ಫಲವೇನು? 

ಸತ್ಯ ಸದಾಚಾರ ಇಲ್ಲದವನು ಜಪ

ಹತ್ತು ಸಾವಿರ ಮಾಡಿ ಫಲವೇನು?||೧||

ತನ್ನ ಸತಿ ಸುತರು ಬಂಧುಗಳ ನೋಯಿಸಿ 

ಚಿನ್ನ ದಾನವ ಮಾಡಿದರೆ ಫಲವೇನು?

ಬಿನ್ನಣದಿಂದಲಿ ದೇಶ ದೇಶವ ತಿರುಗಿ 

ಅನ್ನ ದಾನವ ಮಾಡಿ ಫಲವೇನು?||೨||

ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ

ರೂಪ ಯೌವನವಿದ್ದು ಫಲವೇನು?

ತಾಪತ್ರಯದ ಸಂಸಾರ ಕೆಡಿಸುವಂಥ 

ಪಾಪಿ ಮಗನು ಇದ್ದು ಫಲವೇನು? ||೩|

ತಾಂಡವ ಧನದಿಂದ ತಂದೆ ಮಾತು ಕೇಳದ

ತುಂಡು ಮಗನು ಇದ್ದು ಫಲವೇನು?

ಭಂಡುಮಾಡಿ ಅತ್ತಿ ಮಾವನ ಬೈವ

ಮಂಡ ಸೊಸೆಯಿದ್ದು ಫಲವೇನು? ||೪|

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು 

ಕಾನನದೊಳಗಿದ್ದು ಫಲವೇನು?

ಆನಂದ ಮೂರುತಿ ಪುರಂದರ ವಿಠಲನ 

ನೆನೆಯದ ತನುವಿದ್ದು ಫಲವೇನು? ||೫||
–>